Thursday, June 5, 2025

ಅಡ್ಡೂರು| ಜ.11ರಂದು ರೋಝ್ ಫ್ರೆಂಡ್ಸ್ ಕ್ಲಬ್ ನಿಂದ ಸೌಹಾರ್ದ ಸಂಗಮ- ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

by eesamachara
0 comment

ಅಡ್ಡೂರು: ಇಲ್ಲಿನ ರೋಝ್ ಫ್ರೆಂಡ್ಸ್ ಕ್ಲಬ್ (ರಿ.) ಕಳಸಗುರಿ ಸಂಸ್ಥೆಯ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಸೌಹಾರ್ದ ಸಂಗಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಜ.11 ರಂದು  ಕಳಸಗುರಿಯ ಮೈದಾನದಲ್ಲಿ ಜರುಗಲಿದೆ.

ಅಂದು ಸಂಜೆ 4.30ಕ್ಕೆ ರೋಝ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಳಸಗುರಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವೇಳೆ ಆರ್.ಎಫ್.ಸಿ ಉಪಾಧ್ಯಕ್ಷ ಮೊಹಮ್ಮದ್ ಮೆಹ್ರಾಝ್, ಪ್ರಧಾನ ಕಾರ್ಯದರ್ಶಿ ತೌಸೀಫ್ ಬಿ.ಎಚ್, ಜೊತೆ ಕಾರ್ಯದರ್ಶಿ ಫಾರಿಸ್ ಬಿ.ಎಚ್, ವಾರ್ಷಿಕೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಅನ್ಸಾರ್ ಬಿ.ಎಚ್, ಉಪಾಧ್ಯಕ್ಷರಾದ ಜಬ್ಬಾರ್ ಎಸ್.ಎಚ್, ನಝೀರ್ ಅಲ್-ಮದೀನಾ, ಸ್ವಯಂ ಸೇವಾ ಸಮಿತಿ ಸಂಚಾಲಕ ರಿಝ್ವಾನ್, ಸಹ ಸಂಚಾಲಕ ಬದ್ರುದ್ದೀನ್, ಉದ್ಯಮಿ ರಶೀದ್ ಅಲ್-ಮದೀನಾ, ಕ್ರೀಡಾಕೂಟ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿಝಾಮ್ ಮದೀನಾ, ಕ್ರೀಡಾಕೂಟ ಸಮಿತಿಯ ಜೊತೆ ಕಾರ್ಯದರ್ಶಿ ಜಬ್ಬಾರ್ ಕಲ್ಲಗುಡ್ಡೆ ಭಾಗವಹಿಸಲಿದ್ದಾರೆ.

ಸಂಜೆ 7ಕ್ಕೆ ನಡೆಯಲಿರುವ ಸೌಹಾರ್ದ ಸಂಗಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಾಜಿ ಎಂ.ಎಚ್.ಹಾಜಿ ಮೊಹಿಯುದ್ದೀನ್ ಅವರು ಉದ್ಘಾಟಿಸಲಿದ್ದು, ಆರ್.ಎಫ್.ಸಿ ಗೌರವಾಧ್ಯಕ್ಷ ಜಬ್ಬಾರ್ ಕಳಸಗುರಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವೇಳೆ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಉಪಸ್ಥಿತರಿರಲಿದ್ದಾರೆ. ಕೀಡ್ರೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಾಜಿ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ಗಂದಾಡಿ ಸೋಮನಾಥೇಶ್ವರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ರಾವ್ ನೂಯಿ, ಆರ್.ಎಫ್.ಸಿ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಳಸಗುರಿ, ಬಜಪೆ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್, ಪುತ್ತೂರು ಆದರ್ಶ್ ಫರ್ನಿಚರ್ಸ್ ಮಾಲಕ ಅಬ್ದುರ್ರಹ್ಮಾನ್, ಗುರುಪುರ ಗ್ರಾ.ಪಂ. ಅಧ್ಯಕ್ಷ ಸಫರಾ ನಾಸಿರ್, ಉಪಾಧ್ಯಕ್ಷ ದಾವೂದ್ ಬಂಗ್ಲಗುಡ್ಡೆ, ಸದಸ್ಯರಾದ ಎ.ಕೆ.ಅಶ್ರಫ್, ಎ.ಕೆ.ರಿಯಾಝ್, ಅಝ್ಮಿನಾ, ಪಿ.ಡಬ್ಲ್ಯು.ಡಿ ಕಾಂಟ್ರಾಕ್ಟರ್ ಅಹ್ಮದ್ ಬಾವ, ಆರ್.ಎಸ್.ಸಿ ಮಾಜಿ ಅಧ್ಯಕ್ಷರಾದ ಹಸನ್ ಬಾವ, ಎ.ಕೆ.ಮುಸ್ತಾಕ್, ಮಾಜಿ ಸಲಹೆಗಾರ ಎ.ಕೆ.ಜಬ್ಬಾರ್, ಅಡ್ಡೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಿದಾನಂದ ನಂದ್ಯ, ಉದ್ಯಮಿಗಳಾದ ಜಾಫರ್ ಕೊಯ್ಯಾರ್, ಎ.ಕೆ.ಹಾರಿಸ್, ಝಕರಿಯಾ ರೇಶ್ಮ, ಶೇಖ್ ಮೋನು, ಇಬ್ರಾಹೀಂ ಬೊಟ್ಟಿಕೆರೆ, ನೌಫಲ್ ಕೋಡಿಬೆಟ್ಟು, ಶಮೀರ್ ನೂಯಿ, ಚಂದ್ರಹಾಸ ಪಲ್ಲಿಪಾಡಿ,  ನ್ಯೂ ಇಂಡಿಯಾ ಸಂಸ್ಥೆಯ ಸಂಸ್ಥಾಪಕ ಅಶ್ರಫ್, ಗುರುಪುರ ಗ್ರಾ.ಪಂ.ಮಾಜಿ ಸದಸ್ಯರಾದ ಆದಂ, ಮರಿಯಮ್ಮ ಹನೀಫ್, ರಿಫಾ ಕ್ಲಿನಿಕ್ ಡಾ.ಇ.ಕೆ.ಇ ಸಿದ್ದೀಕ್, ಕಳಸಗುರಿ ಕೆ.ಉಸ್ಮಾನ್ ಸ್ಟೋರ್ ಮುಖ್ಯಸ್ಥೆ ರುಕ್ಷಾನ, ಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮೀ, ಆರ್.ಎಫ್.ಸಿ ಸಲಹೆಗಾರ ನಝೀರ್ ಬಿ.ಎಚ್, ಹಿರಿಯ ಸಲಹೆಗಾರ ಆಲಿಯಬ್ಬ ಕೋಡಿಬೆಟ್ಟು, ಕಳಸಗುರಿ ನವಜ್ಯೋತಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಭೋಜ ಮೂಲ್ಯ, ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಎ.ಎಸ್.ರಫೀಕ್, ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್ ಅಧ್ಯಕ್ಷ ಹಬೀಬ್ ಕಟ್ಟಪುಣಿ, ಎಫ್.ಸಿ.ಕೆ ಅಧ್ಯಕ್ಷ ಹಂಝ ಕೆಳಗಿನಕೆರೆ, ಆರ್.ಎಫ್.ಸಿ ಗಲ್ಫ್ ಕಮಿಟಿ ಸಲಹೆಗಾರ ಇಬ್ರಾಹೀಂ ಕುಚ್ಚಿಗುಡ್ಡೆ, ಕಾಂಜಿಲಕೋಡಿ ರೈಡರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುಭಾಷ್, ಐ20 ಗೈಸ್ ಅಧ್ಯಕ್ಷ ಕಮಲ್ ಕಾಂಜಿಲಕೋಡಿ, ಅಡ್ಡೂರು ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಹನೀಫ್, ಮಂಜೊಟ್ಟಿ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ಮನ್ಸೂರ್ ಮಣ್ಣಗುಡ್ಡೆ, ಎನ್.ಎಫ್.ಸಿ ನೂಯಿ ಅಧ್ಯಕ್ಷ ಶರೀಫ್ ನೂಯಿ, ಅಳಕೆ ಸನ್ ಶೈನ್ ಫ್ರೆಂಡ್ಸ್ ಅಧ್ಯಕ್ಷ ನೂರುದ್ದೀನ್, ಅಡ್ಡೂರು ಜಂಕ್ಷನ್ ಗೈಸ್ ಅಧ್ಯಕ್ಷ ತೌಸೀಫ್ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕಿಕ್ರೆಟ್ ಪಂದ್ಯಾಟ ನಡೆಯಲಿದೆ ಎಂದು ಆರ್.ಎಫ್.ಸಿ ಮಾಧ್ಯಮ ವಕ್ತಾರ ಇರ್ಝಾನ್ ಅಡ್ಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios