ಮಂಗಳೂರು: ಸಾಮರಸ್ಯ ಮಂಗಳೂರು ಹಾಗೂ ದ.ಕ ಜಿಲ್ಲಾ ಕರಾವಳಿ ಹಾಲುಮತ ಕುರುಬರ ಸಂಘ (ರಿ.)ದ ಸಂಯುಕ್ತಾಶ್ರಯದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ 194ನೇ ಪುಣ್ಯಸ್ಮರಣೆ ಕಾರ್ಯಕ್ರಮ ರವಿವಾರ ನಗರದ ಬಲ್ಮಠದ ಕೊಂಕಣಿ ನಾಟಕ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಸಂಘಟಕರು ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಾಮರಸ್ಯ ಮಂಗಳೂರು ಸಂಘಟನೆಯ ಅಧ್ಯಕ್ಷೆ ಮಂಜುಳಾ ನಾಯಕ್, ಕರಾವಳಿ ಹಾಲುಮತ ಕುರುಬರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿ.ಕೆ, ಉಪಾಧ್ಯಕ್ಷರಾದ ಹನುಮಂತ.ವೈ ನರಗುಂದ, ಲಕ್ಷ್ಮೀ ಹಿರೇ ಕುರುಬರ, ಪ್ರ.ಕಾರ್ಯದರ್ಶಿ ಯಮನಪ್ಪ ಮುತ್ತಲಗೇರಿ, ಸಹ ಕಾರ್ಯದರ್ಶಿ ಶರಣಪ್ಪ ನಾಯಕವಾಡಿ, ಕೋಶಾಧಿಕಾರಿ ಮಂಜುನಾಥ ಮಡ್ಡಿ, ಸಂಘಟನಾ ಕಾರ್ಯದರ್ಶಿ ಶಿವರಾಜ್ ಹೂವಿನ ಹಳ್ಳಿ, ಹಿರಿಯ ಸದಸ್ಯರಾದ ಸಂಗಪ್ಪ ಬಡಕನ್ನವರು, ಶಾಂತಪ್ಪ ಡೊಗ್ನದ, ಕನಕಪ್ಪ ಮುತ್ತಲಗೆರಿ, ಬಾಲು, ನೇತ್ರಾವತಿ ಪಾಟೀಲ್, ರಾಜೇಶ್ವರಿ ನಾಯ್ಕ್, ಸಾಮರಸ್ಯ ವೇದಿಕೆಯ ಕಾರ್ಯದರ್ಶಿಗಳಾದ ಟಿ.ಸಿ ಗಣೇಶ್, ರಾಜೇಶ ದೇವಾಡಿಗ, ಸೀತಾರಾಮ್ ಶೆಟ್ಟಿ, ಸಮರ್ಥ್ ಭಟ್, ನೀತು ಶರಣ್ ಮತ್ತಿತರು ಉಪಸ್ಥಿತರಿದ್ದರು.

