ಮಂಗಳೂರು: ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ನೌಕರರ ಸಂಘ(ಐ.ಎಲ್.ಸಿ) ದ ವಾರ್ಷಿಕ ಮಹಾಸಭೆ ಭಾನುವಾರ ನಗರದ ಮಲ್ಲಿಕಟ್ಟೆಯ ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ಜರಗಿತು.
ಸಭೆಯಲ್ಲಿ ಲೆಕ್ಕ ಪತ್ರವನ್ನು ಮಂಡಿಸಲಾಯಿತು. ಬಳಿಕ ಐ.ಎಲ್.ಸಿ 2024-25ನೇ ಸಾಲಿನ ನೂತನ ಪದಾಧಿಕಾರಿಗನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಲಾರೆನ್ಸ್ ಡಿ’ಸೋಜ, ಗೌರಧ್ಯಕ್ಷರಾಗಿ ಕೆ.ಸದಾಶಿವ ಶೆಟ್ಟಿ, ಉಪಾಧ್ಯಕ್ಷರಾಗಿ ಅಜಿತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಪವಿತ್ರ ಕೋಟ್ಯಾನ್, ಖಜಾಂಜಿಗಳಾಗಿ ಪ್ರಸಾದ್, ಸುಜಾತ, ಮಂಗಳೂರು ಘಟಕ ಕಾರ್ಯದರ್ಶಿಯಾಗಿ ವಿಜಯ ಲಕ್ಷ್ಮೀ, ಬೆಂಗಳೂರು ಘಟಕ ಕಾರ್ಯದರ್ಶಿಯಾಗಿ ಯತೀಶ್, ಉತ್ತರ ಕನ್ನಡ ಘಟಕ ಕಾರ್ಯದರ್ಶಿಗಳಾಗಿ ರಾಮ.ಟಿ.ಮೊಗೇರ್, ಹರೀಶ್ ಕಾಂಚನ್, ಜೊತೆ ಕಾರ್ಯದರ್ಶಿಯಾಗಿ ಉಷಾ ಅವರನ್ನು ಮಾಡಲಾಯಿತು.
ಪವಿತ್ರ ಕೋಟ್ಯಾನ್ ಸ್ವಾಗತಿಸಿದರು.
