ಗುರುಪುರ: ಅಡ್ಡೂರು ಗ್ರಾಮದ ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಇದರ ನವೀಕೃತ ಮಸೀದಿ ಕಟ್ಟಡ ಉದ್ಘಾಟನೆ, ಮೂರು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ಫೆ.21ರಿಂದ 23ರ ವರೆಗೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಫೆ.21ರಂದು ನಡೆಯಲಿರುವ ನವೀಕೃತ ಮಸೀದಿಯ ಕಟ್ಟಡ ಉದ್ಘಾಟನೆಯನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ನೆರವೇರಿಸಲಿದ್ದು, ಇಬ್ರಾಹೀಂ ಬಾತಿಷಾ ತಂಙಳ್ ಖುತುಬಾಗೆ ನೇತೃತ್ವ ವಹಿಸಲಿದ್ದಾರೆ.
ಈ ಸಂದರ್ಭ ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಝಕರಿಯಾ ಕೋಡಿಬೆಟ್ಟು, ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಬಿ.ಎಚ್.ಜೆ.ಎಂ ಮಾಜಿ ಅಧ್ಯಕ್ಷ ಹಾಜಿ ಅಹ್ಮದ್ ಬಾವ, ಅಡ್ಡೂರು ಬಿ.ಜೆ.ಎಂ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಉಪಾಧ್ಯಕ್ಷ ಝೈನುದ್ದೀನ್, ಗೌರವಾಧ್ಯಕ್ಷ ಎ.ಎಸ್.ಬಾವುಞಿ, ಬೈಲುಪೇಟೆ ಜೆ.ಜೆ.ಎಂ ಅಧ್ಯಕ್ಷ ಝಕರಿಯಾ ರೇಶ್ಮ, ಬಡಕಬೈಲು ಬಿ.ಜೆ.ಎಂ ಅಧ್ಯಕ್ಷ ನವಾಝ್ ಕುಟ್ಟಿಕಲ, ಅಮ್ಮುಂಜೆ ಎಂ.ಜೆ.ಎಂ ಅಧ್ಯಕ್ಷ ಅಬೂಬಕ್ಕರ್, ಮಾಣಿಬೆಟ್ಟು ಎನ್.ಐ.ಜೆ.ಎಂ ಅಧ್ಯಕ್ಷ ಟಿ.ಎಚ್.ರಫೀಕ್, ಪಲ್ಲಿಪಾಡಿ ನೂರುಲ್ ಇಸ್ಲಾಂ ಮಸೀದಿ ಅಧ್ಯಕ್ಷ ಉಸ್ಮಾನ್, ಉಳಾಯಿಬೆಟ್ಟು ಎಸ್.ಜೆ.ಎಂ ಅಧ್ಯಕ್ಷ ಇಸ್ಮಾಯೀಲ್, ಬದ್ರಿಯಾ ನಗರ ಬಿ.ಜೆ.ಎಂ ಅಧ್ಯಕ್ಷ ಮಹಮ್ಮದ್ ಅಶ್ರಫ್, ಕಲಾಯಿ ಎಂ.ಜೆ.ಎಂ ಅಧ್ಯಕ್ಷ ಹಬೀಬ್ ರಹ್ಮಾನ್, ಉದ್ದಬೆಟ್ಟು ಎಸ್.ಎಚ್.ಜೆ.ಎಂ ಅಧ್ಯಕ್ಷ ಮೊಹಮ್ಮದ್ ಹನೀಫ್, ದೆಮ್ಮಲೆ ಬಿ.ಜೆ.ಎಂ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ಗುರುಪುರ ಜೆ.ಎಂ. ಅಧ್ಯಕ್ಷ ಹಮೀದ್ ಚೆರ್ವತ್, ಬಂಗ್ಲಗುಡ್ಡೆ ಸೈಟ್ ಬಿ.ಜೆ.ಎಂ ಅಧ್ಯಕ್ಷ ದಾವೂದ್ ಬಂಗ್ಲಗುಡ್ಡೆ, ಬಂಗ್ಲಗುಡ್ಡೆ ಎಂ.ಎಂ. ಮಸೀದಿ ಅಧ್ಯಕ್ಷ ಉಸ್ಮಾನ್ ರೈಂಬೊ, ಹಾಜಿ ಇಸ್ಮಾಯೀಲ್ ಗೇಟ್ ಹೌಸ್, ಅಡ್ಡೂರು ಅಲ್-ಬಿರ್ರ್ ಸ್ಕೂಲ್ ಅಧ್ಯಕ್ಷ ಎಂ.ಎಸ್.ಶೇಖ್ ಮೋನು, ಮಸೀದಿ ನವೀಕರಣ ಸಮಿತಿ ಸದಸ್ಯ ಇಬ್ರಾಹೀಂ ಬೊಟ್ಟಿಕೆರೆ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಸಂಜೆ ಮಗ್ರಿಬ್ ನಮಾಝಿನ ಬಳಿಕ ಮಜ್ಲಿಸುನ್ನೂರ್ ಕಾರ್ಯಕ್ರಮ ನಡೆಯಲಿದ್ದು, ಶೈಖುನಾ ಬೊಳ್ಳೂರು ಉಸ್ತಾದ್ ಉದ್ಘಾಟಿಸಲಿದ್ದಾರೆ. ಗುರುವಾಯನಕೆರೆ ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ದುವಾ ನೆರವೇರಿಸಲಿದ್ದಾರೆ. ಇರ್ಷಾದ್ ದಾರಿಮಿ ಅಲ್-ಜಝ್ಹರಿ ಮಿತ್ತಬೈಲ್ ಮಜ್ಲಿಸ್ ನಡೆಸಿಕೊಡಲಿದ್ದಾರೆ. ರಫೀಕ್ ಸಅದಿ ದೇಳಂಪಾಡಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ.
ಫೆ.22ರಂದು ಸಂಜೆ 7ಕ್ಕೆ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಯ್ಯದ್ ಸಫೀಯುಲ್ಲಾಹಿಲ್ ಜಮಾಲುಲೈಲಿ ತಂಙಳ್ ದುವಾ ನೆರವೇರಿಸಲಿದ್ದು, ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಮುಖ್ಯ ಭಾಷಣ ನಡೆಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕಾಂಜಿಲಕೋಡಿ ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್, ಕಾಂಜಿಲಕೋಡಿ ಬಿ.ಎ.ಚ್.ಜೆ.ಎಂ ಮಾಜಿ ಅಧ್ಯಕ್ಷ ಹಾಜಿ ಅಹ್ಮದ್ ಬಾವ, ಪೊಳಲಿ ಬಿ.ಎಫ್.ಜೆ.ಎಂ ಅಧ್ಯಕ್ಷ ಮೊಹಮ್ಮದ್ ಪೊಳಲಿ, ಗೌರವಾಧ್ಯಕ್ಷ ಕೆ.ಇ.ರಮ್ಲಾನ್, ಎಸ್ಕೆಎಸ್ಸೆಸೆಫ್ ಅಡ್ಡೂರು ಕ್ಲಸ್ಟರ್ ಅಧ್ಯಕ್ಷ ಎಸ್.ಬಿ.ಮೊಹಮ್ಮದ್ ಶರೀಫ್ ಅರ್ಶದಿ, ಎಸ್ಕೆಎಸ್ಸೆಸೆಫ್ ಅಡ್ಡೂರು ಯುನಿಟ್ ಅಧ್ಯಕ್ಷ ಉಬೈದ್ ಸಖಾಫಿ, ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಎಂ.ಎಸ್.ರಫೀಕ್, ಖಾಸಿಂ ಪ್ಯಾರ ಅಡ್ಡೂರು, ಎಸ್.ಬಿ.ಅಬೂಬಕ್ಕರ್ ಸಿದ್ದೀಕ್, ಗ್ರಾ.ಪಂ.ಸದಸ್ಯರಾದ ಎ.ಕೆ.ರಿಯಾಝ್, ಶಾಹಿಕ್ ಪಾಂಡೇಲ್, ಅಶ್ರಫ್ ನಡುಗುಡ್ಡೆ, ಮನ್ಸೂರ್ ಟಿಬೆಟ್ ಹಾಗೂ ಹಸನ್ ನೂಯಿ, ಹಸನ್ ಪೊನ್ನೆಲ, ಡಿ.ಎಸ್.ಲತೀಫ್, ಹಸನ್ ಬಾವ ಕುಚ್ಚಿಗುಡ್ಡೆ ಮತ್ತಿತರರು ಭಾಗವಹಿಸಲಿದ್ದಾರೆ.
ಫೆ.23ರಂದು ಬೆಳಿಗ್ಗೆ 10ಕ್ಕೆ ಮೌಲಿದ್ ಮಜ್ಲಿಸ್ ಜರುಗಲಿದ್ದು, ಶೈಖುನಾ ಮುಹಮ್ಮದ್ ಮುಸ್ಲಿಯಾರ್ ಪೂಂಜಲಕಟ್ಟೆ ನೇತೃತ್ವ ವಹಿಸಲಿದ್ದಾರೆ. ಸಯ್ಯದ್ ನಜೀಮುದ್ದೀನ್ ಪೂಕೋಯ ತಂಙಳ್ ದುವಾ ನೆರವೇರಿಸಲಿದ್ದು, ಉಸ್ತಾದ್ ಅಲ್ ಹಾಫಿಲ್ ಅಬ್ದುಲ್ ರಝಾಕ್ ಅಬ್ರಾರಿ ಉಪನ್ಯಾಸ ನೀಡಲಿದ್ದಾರೆ. ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಖತೀಬ್ ಯಾಕೂಬ್ ಫೈಝಿ ಸೇರಿದಂತೆ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಸಂಜೆ 5ಕ್ಕೆ ಸೌಹಾರ್ದ ಸಂಗಮ ನಡೆಯಲಿದ್ದು, ಅಡ್ಡೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸದಕತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಯ್ಯದ್ ನಜೀಮುದ್ದೀನ್ ಪೂಕೋಯ ತಂಙಳ್ ದುವಾ ನೆರವೇರಿಸಲಿದ್ದಾರೆ. ಕಾಂಜಿಲಕೋಡಿ ಬದ್ರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಝಕರಿಯಾ ಕೋಡಿಬೆಟ್ಟು ಅಧ್ಯಕ್ಷತೆ, ಸಭಾಧ್ಯಕ್ಷತೆ ಕಾಂಜಿಲಕೋಡಿ ಬಿ.ಎಚ್.ಜೆ.ಎಂ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಂ.ಎಚ್.ಮುಹಿಯುದ್ದೀನ್ ವಹಿಸಲಿದ್ದಾರೆ. ಹುಸೈನ್ ದಾರಿಮಿ ರೆಂಜಿಲಾಡಿ, ಪ್ರೊ.ಅನೀಸ್ ಕೌಸರಿ, ಸೂಫಿಯಾನ್ ಸಖಾಫಿ ಪ್ರಾಸ್ತಾವಿಕ ಮಾತನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಶಾಸಕರಾದ ಮೊಯ್ದೀನ್ ಬಾವ, ಬಿ.ಎಂ.ಫಾರೂಕು, ಜಿ.ಪಂ. ಮಾಜಿ ಸದಸ್ಯ ಯು.ಪಿ.ಇಬ್ರಾಹೀಂ, ಎಸ್.ಡಿ.ಪಿಐ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಬಜಪೆ ಪೊಲೀಸ್ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಎಸ್.ಡಿ.ಪಿಐ ಮಂಗಳೂರು ಉತ್ತರ ಅಧ್ಯಕ್ಷ ಜಲೀಲ್.ಕೆ, ಕಾಂಜಿಲಕೋಡಿ ಬಿ.ಎಚ್.ಜೆ.ಎಂ ಮಾಜಿ ಅಧ್ಯಕ್ಷ ಹಾಜಿ ಅಹ್ಮದ್ ಬಾವ, ಶಾಹುಲ್ ಹಮೀದ್ ಮೆಟ್ರೊ, ಗ್ರಾ.ಪಂ.ಸದಸ್ಯರಾದ ಎ.ಕೆ.ಅಶ್ರಫ್, ಮೊಹಮ್ಮದ್ ಅಶ್ರಫ್, ರುಕ್ಮಯಾ ಉಳಿಯ, ಆಸಿಫ್ ಆದರ್ಶ್, ಯುಸೂಫ್ ಮಾಝ್ದಾ, ಎ.ಕೆ.ಆರಿಸ್, ರಫೀಕ್ ಹುದವಿ, ಹಸನ್ ನೂಯಿ, ಚಿದಾನಂದ ಗುರಿಕಾರ ನಂದ್ಯ, ಯಶವಂಶ ಶೆಟ್ಟಿ, ಭಾಸ್ಕರ್ ಮುಂಬೈ, ಧನಂಜಯ ಹೊಳ್ಳ, ಗಂಗಾದರ ದಾಸ್, ಶಿವಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ.
