ಮಂಗಳೂರು: ಮಂಗಳೂರು ನಗರ ಮತ್ತು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಚುನಾಯಿತರಿಗೆ 26ನೇ ದೇರೆಬೈಲ್ ನೈಋತ್ಯ ವಾರ್ಡ್ ಕಾಂಗ್ರೆಸ್ ಸಮಿತಿಯ ವತಿಯಿಂದ ಶನಿವಾರ ಅಭಿನಂದಿಸಲಾಯಿತು.
ಚುನಾಯಿತರಾದ ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವೆಲ್ವಿನ್ ಜೇಸನ್ ಕ್ಯಾಸ್ಟಲೀನೋ, ಉಪಾಧ್ಯಕ್ಷ ಪೃಥ್ವಿ ಸಾಲ್ಯಾನ್, ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ಶೃತಿ ಪ್ರವೀಣ್ ಅವರಿಗೆ ಶಾಲುಹೊದಿಸಿ ಅಭಿನಂದಿಸಲಾಯಿತು.
ಈ ಸಂದರ್ಭ ದ.ಕ ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ದೇರೆಬೈಲ್ ನೈಋತ್ಯ ವಾರ್ಡ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಟಿ.ಸಿ ಗಣೇಶ್, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಶ್ರೀಮತಿ ಮಂಜುಳಾ ನಾಯಕ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪದ್ಮನಾಭ್ ಅಮೀನ್, , ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಸಮರ್ಥ್ ಭಟ್, ಜಿಲ್ಲಾ ಓಬಿಸಿ ಉಪಾಧ್ಯಕ್ಷೆ ಗೀತಾ ಪ್ರವೀಣ್, ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಕ್ಷಿತ್, ಸೀತಾರಾಮ್ ಶೆಟ್ಟಿ, ಸಿರಿಲ್ ಪಿಂಟೋ, ಕಿಶೋರ್, ಶೇಖರ್, ರಾಮಣಿ, ಮೋಹಿನಿ , ರವಲನಾಥ್ ಕಾಮತ್, ನೀತು ಶರಣ್, ರಾಜೇಶ್ ದೇವಾಡಿಗ , ಮನೋಜ್ ಮತ್ತಿತರು ಉಪಸ್ಥಿತರಿದ್ದರು.


