ಉಳ್ಳಾಲ: ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ನಾಳೆ (ನ.16) ಮಧ್ಯಾಹ್ನ 1ರಿಂದ ಜನ ಸಂಪರ್ಕ ಸಭೆಯು ನರಿಂಗಾನ ಗ್ರಾಪಂನ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಲಿದೆ.
ಇದೇ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಕುಂದುಕೊರತೆ ನಿವಾರಣೆ, ಮತದಾರ ಪಟ್ಟಿಗೆ ನೋಂದಣಿ, ಗ್ಯಾರಂಟಿ ಯೋಜನೆ ನೋಂದಣಿ, ಆಧಾರ್ ನೋಂದಣಿ-ತಿದ್ದುಪಡಿ, ಹಕ್ಕುಪತ್ರ ವಿತರಣೆ, ಪಂಚಾಯಿತಿ ಕಚೇರಿ ಆವರಣದಲ್ಲಿ ಅಳವಡಿಸಿದ ಇಂಟರ್ಲಾಕ್, ಮುಖ್ಯದ್ವಾರ ಉದ್ಘಾಟನೆ, ಗುಡಿಸಲು ಮುಕ್ತ ಗ್ರಾಮ ಯೋಜನೆಯಡಿ ಪದ್ಮಾವತಿ ಎಂಬವರಿಗೆ 8 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ತಾರಸಿ ಮನೆ ಯು.ಟಿ.ಕೆ. ಕುಟೀರದ ಕೀ ಹಸ್ತಾಂತರ, ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ನೇತೃತ್ವದಲ್ಲಿ ಕಸಮುಕ್ತ ಗ್ರಾಮ ಯೋಜನೆಗೆ ಚಾಲನೆ ಹಾಗೂ ಕಳ್ಳರಕೋಡಿ ಶಾಲೆಯಲ್ಲಿ ನಿರ್ಮಿಸಿದ 3 ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ನವಾಝ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.