Friday, June 6, 2025

ಶಕ್ತಿನಗರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಮನವಿ| ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

by eesamachara
0 comment

ಮಂಗಳೂರು: ಮಧ್ಯಮ ವರ್ಗದ ಜನರು, ಕಾರ್ಮಿಕರು ಹೆಚ್ಚಿರುವ ಶಕ್ತಿನಗರದಲ್ಲಿ ಮಹತ್ವಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಮಾಡಿದ ಮನವಿಗೆ ರಾಜ್ಯ ಸರ್ಕಾರ ಇತ್ತೀಚಿಗೆ ಸ್ಪಂದಿಸಿದೆ.

ನಗರದ ಶಕ್ತಿನಗರದ ಕಾರ್ಮಿಕ ಕಾಲನಿ, ಪದವು, ರಾಜೀವ್ ನಗರ, ಮಂಜಡ್ಕ, ನೀತಿನಗರ, ಕುಂಟಲ್ಪಾಡಿ, ಬೊಲ್ಯ, ತಿಮ್ಮಪ್ಪಪೈ ಹಾಗೂ ಪ್ರೀತಿನಗರದಲ್ಲಿ ದಿನಗೂಲಿ ಕಾರ್ಮಿಕರು, ಆರ್ಥಿಕವಾಗಿ ದುರ್ಬಲರಾಗಿರುವ ಜನರು ಹೆಚ್ಚಾಗಿ ವಾಸವಾಗಿದ್ದಾರೆ. ಇಲ್ಲಿಗೆ ಪ್ರತಿನಿತ್ಯ ಹೊರವಲಯದ ಕಾರ್ಮಿಕರು ಕೆಲಸಕ್ಕೆ ಆಗಮಿಸುತ್ತಾರೆ. ತೀರಾ ಬಡವರಾಗಿರುವ ಇಲ್ಲಿನ ಕಾರ್ಮಿಕ ವರ್ಗವು ತಮ್ಮ ದೈನಂದಿನ ಊಟೋಪಚಾರಕ್ಕೆ ಖಾಸಗಿ ಹೋಟೇಲ್ ಗಳನ್ನು ಆಶ್ರಯಿಸುತ್ತಿದ್ದು, ದುಬಾರಿ ಹಣ ತೆತ್ತು ಊಟ, ಉಪಹಾರಗಳನ್ನು ಪಡೆಯುವುದು ಇವರಿಗೆ ತ್ರಾಸದಾಯಕವಾಗಿದೆ. ಈ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ತೆರೆದರೆ ಇಲ್ಲಿನ ಬಡ ಕಾರ್ಮಿಕರಿಗೆ ಪ್ರಯೋಜನವಾಗಲಿದೆ. ಈ ಹಿನ್ನೆಲೆಯಲ್ಲಿ  ಶಕ್ತಿನಗರದ 21 ಮತ್ತು 35ನೇ ವಾರ್ಡ್ ನ ಕಾಂಗ್ರೆಸ್ ಕಾರ್ಯಕರ್ತರು ಸಮಸ್ಯೆ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕಾನೂನು, ಮಾನವ ಮಾಹಿತಿ ಹಕ್ಕು ಘಟಕ ಅಧ್ಯಕ್ಷ ಮನೋರಾಜ್ ರಾಜೀವ್ ಅವರ ಗಮನಕ್ಕೆ ತಂದಿದ್ದರು.

ಕೂಡಲೇ ಮನೋರಾಜ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ  ರಾಜ್ಯ ಆಹಾರ, ನಾಗರಿಕ ಸರಬರಾಜು ಸಚಿವ ಡಾ.ಹೆಚ್.ನಟರಾಜ್ ಅವರು ಫೆ.24ರಂದು ಶಕ್ತಿನಗರದ ಪದವು ಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿ ಅನುಷ್ಠಾನಕ್ಕೆ ಮಂಗಳೂರು ಆಯುಕ್ತರಿಗೆ ಆದೇಶಿಸಿದ್ದಾರೆ.

ಇದರಿಂದ ಇಲ್ಲಿನ ಬಡ, ನಿರ್ಗತಿಕ, ಕೂಲಿಕಾರರಿಗೆ ರಿಯಾಯಿತಿ ದರದಲ್ಲಿ ಉಪಾಹಾರ ನೀಡಿ ಹೊಟ್ಟೆತಣಿಸಲು ಮುಂದಾಗಿರುವ ಸರ್ಕಾರದ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ  ಮನೋರಾಜ್ ಅವರು ಶಕ್ತಿನಗರದ ನಿವಾಸಿಗಳ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿನಂದಿಸಿದ್ದಾರೆ.

ಸರ್ಕಾರಿ ಬಸ್ ವ್ಯವಸ್ಥೆ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಡಿ ಹೆಚ್ಚುವರಿ ಸರ್ಕಾರಿ ಒದಗಿಸಿ ಪದವು ಗ್ರಾಮದ ಪ್ರೀತಿನಗರ, ಸಂಜಯನಗರ, ಮುಗ್ರೋಡಿ, ನೇಜುಗುರಿ, ಮಂಜಡ್ಕ, ಬೊಲ್ಯ ನಿವಾಸಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಮನೋರಾಜ್ ನೇತೃತ್ವ ಕಾಂಗ್ರೆಸ್ ನಿಯೋಗ ಸಚಿವ ರಾಮಲಿಂಗರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ಅದರಂತೆ ಸಚಿವರು ಇಲ್ಲಿಗೆ ಸರ್ಕಾರಿ ಬಸ್ ವ್ಯವಸ್ಥೆಗೊಳಿಸಿದ್ದು, ಇನ್ನೆರಡು ದಿನಗಳಲ್ಲಿ ಈ ರೂಟ್ ನಲ್ಲಿ ಬಸ್ ಸಂಚರಿಸಲಿದೆ.

ಕಳೆದೆರಡು ತಿಂಗಳ ಹಿಂದೆ ಶಕ್ತಿನಗರಕ್ಕೆ ರೂಟ್ ನಂ.6ರ ಸರ್ಕಾರಿ ಬಸ್ ಪುನರಾಂಭಿಸಲಾಗಿತ್ತು. ಇದಕ್ಕಾಗಿ ಸಚಿವ ರಾಮಲಿಂಗರೆಡ್ಡಿ ಅವರನ್ನು ಮನೋರಾಜ್ ಶ್ಲಾಘಿಸಿದ್ದಾರೆ.

indira canteen

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios