Friday, June 6, 2025

ಲೋಕಸಭಾ ಚುನಾವಣೆ: ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ವೀಕ್ಷಕರ ನೇಮಕ

by eesamachara
0 comment

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಸಜ್ಜಾಗುತ್ತಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಈಗಾಗಲೇ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ನೂತನ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದೆ.

ನಿಯೋಜಿತ ವೀಕ್ಷಕರು ಈ ಕೂಡಲೇ ತಮಗೆ ವಹಿಸಲಾಗಿರುವ ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗಳಿಗೆ ತೆರಳಿ ಸ್ಥಳೀಯ ಶಾಸಕರು, ಮಾಜಿ ಶಾಸಕರು, 2023ರ ವಿಧಾನಸಭಾ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಈ ನಿಟ್ಟಿನಲ್ಲಿ  ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಹಾಜರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸೂಚಿಸಿದ್ದಾರೆ.

ವಿಧಾನ ಸಭಾಕ್ಷೇತ್ರ:

  1. ಬೆಳ್ತಂಗಡಿ   ಎಂ.ಎಸ್.ಮಹಮ್ಮದ್
  2. ಮೂಡಬಿದ್ರೆ ಮಹಾಬಲ ಮಾರ್ಲ
  3. ಮಂಗಳೂರು ನಗರ ಉತ್ತರ ಕೆ.ಶುಭೋದಯ ಆಳ್ವ
  4. ಮಂಗಳೂರು ನಗರ ದಕ್ಷಿಣ  ಪ್ರತಿಭಾ ಕುಳಾಯಿ
  5. ಮಂಗಳೂರು ಎ.ಸಿ. ವಿನಯರಾಜ್
  6. ಬಂಟ್ವಾಳ   ಆರ್.ಕೆ. ಪೃಥ್ವಿರಾಜ್
  7. ಪುತ್ತೂರು   ಶಶಿಧರ್ ಹೆಗ್ಡೆ
  8. ಸುಳ್ಯ ದುರ್ಗಪ್ರಸಾದ್ ರೈ ಕುಂಬ್ರ

ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿ:

  1. ಬೆಳ್ತಂಗಡಿ ನಗರ ಬ್ಲಾಕ್ ಮೊಹಮ್ಮದ್ ಅಲಿ ಪುತ್ತೂರು
  2. ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಸತೀಶ್ ಕುಮಾರ್ ಕೆಡಿಂಜೆ
  3. ಮೂಡಬಿದ್ರೆ ಬ್ಲಾಕ್ ಅನಿಲ್ ಕುಮಾರ್
  4. ಮುಲ್ಕಿ ಬ್ಲಾಕ್ ಪ್ರವೀಣ್ ಚಂದ್ರ ಆಳ್ವ
  5. ಸುರತ್ಕಲ್ ಬ್ಲಾಕ್ ಗಿರೀಶ್ ಶೆಟ್ಟಿ
  6. ಗುರುಪುರ ಬ್ಲಾಕ್ ಪುರಂದರ ದೇವಾಡಿಗ
  7. ಮಂಗಳೂರು ನಗರ ಬ್ಲಾಕ್ ಮೊಹಮ್ಮದ್ ಕುಂಜತ್ತಬೈಲ್
  8. ಮಂಗಳೂರು ದಕ್ಷಿಣ ಬ್ಲಾಕ್ ಚಿತ್ತರಂಜನ್ ಶೆಟ್ಟಿ ಬೊಂಡಾಲ
  9. ಉಳ್ಳಾಲ ಬ್ಲಾಕ್ ಟಿ.ಕೆ.ಸುಧೀರ್
  10. ಮುಡಿಪು ಬ್ಲಾಕ್ ನೀರಜ್ ಚಂದ್ರಪಾಲ್
  11. ಬಂಟ್ವಾಳ ಬ್ಲಾಕ್ ಮಹೇಶ್ ರೈ ಕಾವು
  12. ಪಾಣೆಮಂಗಳೂರು ಬ್ಲಾಕ್ ಗಣೇಶ್ ಪೂಜಾರಿ
  13. ಪುತ್ತೂರು ಬ್ಲಾಕ್ ಜಯಪ್ರಕಾಶ್ ರೈ
  14. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಉಮ್ಮರ್ ಫಾರೂಕ್ ಪುದು
  15. ಸುಳ್ಯ ಬ್ಲಾಕ್ ಭಾಸ್ಕರ್ ಗೌಡ ಕೋಡಿಂಬಾಳ
  16. ಕಡಬ ಬ್ಲಾಕ್ ಉಮನಾಥ್ ಶೆಟ್ಟಿ

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios