ಪುತ್ತೂರು: ಬುಸ್ತಾನುಲ್ ಬಾದುಷಾ ಮಜ್ಲೀಸ್ ಹಾಗೂ ಜಲಾಲಿಯ್ಯ ರಾತೀಬ್ ಸಮಿತಿ ಕೆಮ್ಮಾಯಿ ಇದರ ಜಂಟಿ ಆಶ್ರಯದಲ್ಲಿ 2ನೇ ವಾರ್ಷಿಕ ಜಲಾಲಿಯ್ಯ ಕಾರ್ಯಕ್ರಮ ಜ.7ರಂದು (7.01.2024) ಕೆಮ್ಮಾಯಿಯ ತಂಙಳ್ ನಿವಾಸದಲ್ಲಿ ನಡೆಯಲಿದೆ.
ಮಗ್ರಿಬ್ ನಮಾಝಿನ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಯು.ಕೆ. ಮುಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಅವರು ಮುಖ್ಯ ಪ್ರಭಾಷಣ ಗೈಯ್ಯಲಿರುವರು. ಇಶಾ ನಮಾಝಿನ ಬಳಿಕ ಸೈಯ್ಯದ್ ಮುಖ್ತಾರ್ ತಂಙಳ್ ಕುಂಬೋಲ್ ಅವರ ನೇತೃತ್ವದಲ್ಲಿ ಜಲಾಲಿಯ್ಯ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದಲ್ಲಿ ಹಾಜಿ ಸೈಯ್ಯದ್ ಅಬೂಬಕ್ಕರ್ ಅಲ್ ಹಾದಿ ತಂಙಳ್ ಕೆಮ್ಮಾಯಿ ಅವರು ಅಧ್ಯಕ್ಷತೆ ವಹಿಸಲಿದ್ದು, ಉಲಮಾ-ಉಮರಾ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.