ಮಂಗಳೂರು: ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾಗಿ ಭರತ್ ಮುಂಡೋಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಜೋಕಿಂ ಡಿಸೋಜಾ, ಸುರೇಖಾ ಚಂದ್ರಹಾಸ್, ಎಂ.ಕೆ.ಯೂಸುಫ್, ಶೇಖರ್ ಕುಕ್ಕೇಡಿ, ನಾರಾಯಣ ನಾಯ್ಕ್, ಸದಸ್ಯರಾಗಿ ಅಬ್ಬಾಸ್ ಅಲಿ, ಪೂರ್ಣೇಶ್ ಭಂಡಾರಿ, ಆಲಿಸ್ಟರ್ ಡಿಕುನ್ಹ, ಶಾಂತಲಾ ಗಟ್ಟಿ, ರಂಜಿತ್ ರೈ, ಸುದರ್ಶನ್ ಜೈನ್ ಆಯ್ಕೆಯಾಗಿದ್ದಾರೆ.
ತಾಲೂಕು ಅನುಷ್ಠಾನ ಸಮಿತಿ: ಮೂಡಬಿದ್ರೆ ತಾಲೂಕು ಮಟ್ಟದ ಅಧ್ಯಕ್ಷರಾಗಿ ಅರುಣ್ ಕುಮಾರ್ ಶೆಟ್ಟಿ, ಮುಲ್ಕಿ ತಾಲೂಕು ಮಟ್ಟದ ಅಧ್ಯಕ್ಷರಾಗಿ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಬಂಟ್ವಾಳ ತಾಲೂಕು ಮಟ್ಟದ ಅಧ್ಯಕ್ಷರಾಗಿ ಜಯಂತಿ, ಪುತ್ತೂರು ತಾಲೂಕು ಮಟ್ಟದ ಅಧ್ಯಕ್ಷರಾಗಿ ಉಮಾನಾಥ್ ಶೆಟ್ಟಿ ಬ್ರಮರಿ ಹಾಗೂ ಸುಳ್ಯ ತಾಲೂಕು ಮಟ್ಟದ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಅವರು ನೇಮಕಗೊಂಡಿದ್ದು, ಜಿಲ್ಲಾ ಸಮಿಯಲ್ಲೂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.