Manjula Nayak ಗೂಡಂಗಡಿ ತೆರವು ಕಾರ್ಯಾಚರಣೆ| ಗುಬ್ಬಿ ಮೇಲೆ ಬ್ರಾಹ್ಮಸ್ತ್ರ ಪ್ರಯೋಗ: ಮಂಜುಳಾ ನಾಯಕ್ ಮಂಗಳೂರು: ಮಹಾನಗರ ಪಾಲಿಕೆ ಅಧಿಕಾರಿಗಳು ಬುಧವಾರ ನಗರದಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಿರುವ ಘಟನೆಗೆ ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್ ಖಂಡನೆ ವ್ಯಕ್ತಪಡಿಸಿದ್ದಾರೆ.
“ಮಂಗಳೂರು ನಗರದಲ್ಲಿ ಫ್ಲೈಓವರ್ ತಳಭಾಗಗಳು ಸೇರಿದಂತೆ ಹಲವೆಡೆ ಗೂಡಂಗಡಿಗಳನ್ನು ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿ ತೆರವು ಮಾಡಿರುವುದು ಉತ್ತರ ಪ್ರದೇಶದ ಪ್ರಜಾಪ್ರಭುತ್ವ ವಿರೋಧಿ ಕೃತ್ಯವನ್ನು ನೆನಪಿಸುತ್ತದೆ. ಮೇಯರ್ ಅವರು ಪ್ರವಾಸದಲ್ಲಿರುವಾಗ ಅಧಿಕಾರಿಗಳು ನಡೆಸಿರುವ ಈ ಕಾರ್ಯಾಚರಣೆ ಹಲವಾರು ಕುಟುಂಬಗಳ ಜೀವನೋಪಾಯವನ್ನು ಕಸಿದುಕೊಂಡಿದೆ. ಈ ದೇಶದಲ್ಲಿ ಬಡುಕುವ ಹಕ್ಕು, ದುಡಿಯುವ ಹಕ್ಕು ಎಲ್ಲರಿಗೂ ಇದೆ. ಆದರೆ, ಮಹಾನಗರ ಪಾಲಿಕೆಯ ಆಡಳಿತ ರಾಜಧರ್ಮವನ್ನು ಮೀರಿ ಅಧರ್ಮದಿಂದ ಜನರ ಬದುಕನ್ನು ಬೀದಿಪಾಲು ಮಾಡುತ್ತಿರುವುದು ಖಂಡನೀಯ” ಎಂದು ಹೇಳಿದ್ದಾರೆ.
ಗೂಡಂಗಡಿ ತೆರವು ಕಾರ್ಯಾಚರಣೆ| ಗುಬ್ಬಿ ಮೇಲೆ ಬ್ರಾಹ್ಮಸ್ತ್ರ ಪ್ರಯೋಗ: ಮಂಜುಳಾ ನಾಯಕ್ಗಡಂಗಡಿಗಳಿಂದ

Manjula Nayak ಸಾರ್ವಜನಿಕರಿಗೆ ಪ್ರಯೋಜನ ಇದೆ
ಪಾರ್ಕಿಂಗ್ ಸೇರಿದಂತೆ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮಕೈಗೊಳ್ಳಲಾಗದ ಮಹಾನಗರ ಪಾಲಿಕೆ ನೋಟಿಸ್ ನೀಡದೆ ಗೂಡಂಗಡಿಗಳನ್ನು ತೆರವುಗೊಳಿಸಿರುವುದು ಅಧರ್ಮವಾಗಿದೆ. ಬಡಜನರ ಬದುಕನ್ನು ಕಸಿಯುವ ಅಧಿಕಾರ ಮೇಯರ್ ಅವರಿಗೆ ಇಲ್ಲ. ಗೂಡಂಗಡಿಗಳಿಂದ ಸಾರ್ವಜನಿಕರಿಗೆ ಪ್ರಯೋಜನ ಇದೆಯೇ ಹೊರತು ತೊಂದರೆ ಆಗಿಲ್ಲ. ದೂರುಗಳು ಇವೆ ಎಂಬುದು ಸುಳ್ಳು. ದೂರುಗಳಿದ್ದರೆ ಅಂತಹ ದೂರುಗಳನ್ನು ಬಹಿರಂಗ ಪಡಿಸಲಿ ಎಂದವರು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಗೂಡಂಗಡಿಯವರಿಗೆ ಆಧಾರ್ ಯೋಜನೆಯಡಿ ಕರೆದು ಧನ ಸಹಾಯ ನೀಡಿದೆ. ಇದೀಗ ಮಂಗಳೂರು ಮೇಯರ್ ಅವರು ನಡೆಸಿರುವ ಕೃತ್ಯವು ಮೋದಿ ವಿರೋಧಿ ಕೆಲಸವಾಗಿದೆ. ಮೇಯರ್ ಅವರು ಪ್ರಧಾನಿಯವರ ಯೋಜನೆಯವರ ಫಲಾನುಭವಿಗಳ ಗೂಡಂಗಡಿಗಳ ಮೇಲೆ ಯಾಕೆ ಬುಲ್ಡೋಜರ್ ಹತ್ತಿಸಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.