Saturday, June 7, 2025

ಕಸ ವಿಲೇವಾರಿ ಸ್ಥಗಿತ: ನಾಗರಿಕರ ಆರೋಗ್ಯದ ಬಗ್ಗೆ ಬಿಜೆಪಿಗೆ ಕಿಂಚಿತ್ತು ಕಾಳಜಿ ಇಲ್ಲ; ಎ.ಸಿ.ವಿನಯರಾಜ್

by eesamachara
0 comment

ಮಂಗಳೂರು: ರಾಜ್ಯಾ ದ್ಯಂತ ಸ್ಥಳೀಯ ಸಂಸ್ಥೆಗಳ ಕಸ ವಿಲೇವಾರಿ ನೌಕರರು ನೇರ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದರಿಂದ ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಗಳು ಸುಮಾರು 3-4 ದಿನಗಳಿಂದ ಅಸ್ತವ್ಯಸ್ಥವಾಗಿದೆ. ಆದರೆ ರಾಜ್ಯದ ಮುಖ್ಯಮಂತ್ರಿ, ಪೌರಾಡಳಿತ ಮಂತ್ರಿ ಹಾಗೂ ನಗರಾಭಿವೃದ್ಧಿ ಮಂತ್ರಿಗಳು ಚುನಾವಣೆಯ ಭರಾಟೆಯಲ್ಲಿ ಇದ್ದಾರೆ. ಅವರಿಗೆ ನಾಗರಿಕರ, ಕಾರ್ಮಿಕರ ಭವಿಷ್ಯ ಮತ್ತು ಆರೋಗ್ಯದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ಕೆಪಿಸಿಸಿ ವಕ್ತಾರ ಹಾಗೂ ಮನಪಾ ಸದಸ್ಯ ಎ.ಸಿ.ವಿನಯರಾಜ್ ಆರೋಪಿಸಿದ್ದಾರೆ.

ಮಂಗಳವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಮಾಡುವ ಕೆಲಸವನ್ನು ನಿಲ್ಲಿಸಲಾಗಿದೆ ಹಾಗೂ ಒಳಚರಂಡಿ ವ್ಯವಸ್ಥೆಯ ನೌಕರರು ಕೂಡ ಪ್ರತಿಭಟನಾ ನಿರತರಾಗಿದ್ದಾರೆ.  ಕಸ ವಿಲೇವಾರಿ ಮಾಡದೇ ಇರುವುದರಿಂದ ಸ್ವಚ್ಛತೆ ಕೆಟ್ಟಿದ್ದು ನಗರದ ವಾತಾವರಣ ಗಬ್ಬುವಾಸನೆಯುಕ್ತವಾಗಿದ್ದು, ನಾಗರಿಕರ ಆರೋಗ್ಯದ ಮೇಲೆ ಮತ್ತು ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಮ.ನ.ಪಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಆಡಳಿತ ಮತ್ತು ಇಲ್ಲಿಯ ಇಬ್ಬರು ಶಾಸಕರುಗಳಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮಂಗಳೂರಿನಲ್ಲಿ ನಡೆಯಲಿರುವ ಸಮಾವೇಶಕ್ಕೆ ಜನ ತರುವ ಬಗ್ಗೆ ನಿರತರಾಗಿದ್ದಾರೆ ಎಂದು ದೂರಿದರು.

ಮ.ನ.ಪಾ ಮೇಯರ್ ಇದರ ಬಗ್ಗೆ ನನಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಶಾಸಕರುಗಳು ಈ ಸಮಸ್ಯೆಯನ್ನು ಪರಿಹರಿಸಲು ಪ್ರತಿಭಟನೆಯಲ್ಲಿ ನಿರತರಾಗಿರುವ ಕಾರ್ಮಿಕರೊಂದಿಗೆ ಮಾತುಕತೆ ನಡೆಸುವುದಾಗಲಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ಸ್ಥಳೀಯಾಡಳಿತ ಮತ್ತು ಇಲ್ಲಿಯ ಶಾಸಕರುಗಳು ಆಡಳಿತ ವೈಫಲ್ಯವನ್ನು ಕಂಡಿದ್ದಾರೆ.  ಕಸ ವಿಲೇವಾರಿ ಕಂಪೆನಿಯ ಗುತ್ತಿಗೆ ಮುಗಿದು ಸುಮಾರು ಒಂದುವರೆ ವರ್ಷ ಕಳೆದಿದ್ದು, ಗುತ್ತಿಗೆದಾರರು ಕರಾರಿನಂತೆ ಬೇಕಾಗಿರುವ ಕಸ ವಿಲೇವಾರಿ ವಾಹನಗಳನ್ನು ಹಾಗೂ ಕಾರ್ಮಿಕರನ್ನು ಹಾಕಿಲ್ಲ. ಆದರೆ ಅವರಿಗೆ ಪೂರ್ಣ ಪ್ರಮಾಣದ ಹಣ ಪಾವತಿಯಾಗುತ್ತಿದೆ. ಇದರಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ ಎಂದರು.

ಪಚ್ಚನಾಡಿ ಡಂಪಿಂಗ್ ಯಾರ್ಡ್ ಕುರಿತಾಗಿ ಮಾತನಾಡಿದ ಅವರು,  ಎರಡು ತಿಂಗಳಿನಲ್ಲಿ ಮೂರು ಸಲ ಬೆಂಕಿ ಬಿದ್ದು ಅಲ್ಲಿಯ ರಾಸಾಯನಿಕ ವಿಷಪೂರಿತ ಹೊಗೆಯಿಂದ ಸ್ಥಳೀಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿದ್ದು, ಇದರ ಬಗ್ಗೆ ಶಾಸಕರುಗಳು ಹಾಗೂ ಸ್ಥಳೀಯಾಡಳಿತ ತಲೆಕೆಡಿಸಿಕೊಂಡತ್ತಿಲ್ಲ.  ಪಚ್ಚನಾಡಿ ಡಂಪಿಂಗ್ ಯಾರ್ಡ್‍ನ ಕಸವನ್ನು ಬೆಂಕಿ ಹಾಕಿ ವಿಲೇವಾರಿ ಮಾಡಲು ಮ.ನ.ಪಾ ಹೊರಟಂತಿದೆ.  

ಈ ಸಂದರ್ಭ ಪ್ರಕಾಶ್ ಸಾಲ್ಯಾ ನ್, ಸಂಶುದ್ದೀ ನ್, ಲತೀಫ್ ಕಂದಕ್, ಟಿ.ಹೊನ್ನ ಯ, ಸುನೀಲ್ ಪೂಜಾರಿ, ರಾಕೇಶ್ ದೇವಾಡಿಗ, ಶಾಂತಲಾ ಗಟ್ಟಿ, ನಝೀರ್ ಬಜಾಲ್  ಉಪಸ್ಥಿತರಿದ್ದರು.

You may also like

Leave a Comment

ಸಾಮಾಜಿಕ ಹೊಣೆಯನ್ನು ಅರಿತು ಅನ್ಯಾಯಅನೀತಿಅಸಮಾನತೆಗಳ ನೈಜ ಸ್ವರೂಪವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿಕೊಡುವುದರ ಮೂಲಕ ಸಮಾಜ-ಧರ್ಮ-ಜನರ ಮಧ್ಯೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯಕ್ಕೆ ಒತ್ತು ನೀಡುವ ಸತ್ಯ ಸುದ್ದಿಗಳು ಬಿತ್ತರಿಸುವುದುದ್ವೇಷ ಮತ್ತು ಸುಳ್ಳು ಸುದ್ದಿಗಳ ತಡೆಯುವಿಕೆಯೇ ನಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ.

@2024 – eesamachara. All Right Reserved. Developed by denebstudios